ಹಾಸನ : ಸಕಲೇಶಪುರ ತಾಲೂಕಿನ ಬೆಳ್ಳೆಕೆರೆ ಪೂರ್ಣ ಚಂದ್ರ ತೇಜಸ್ವಿ ಬಯಲು ರಂಗ ಮಂದಿರದಲ್ಲಿ ಮಾರ್ಚ್ 8ರ ಶನಿವಾರದಂದು ಸಂಜೆ 5 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಜೈ ಕರ್ನಾಟಕ ಸಂಘ ಬೆಳ್ಳೆಕೆರೆ ಸಂಸ್ಥಾಪಕ ಮತ್ತು ಹಿರಿಯ ರಂಗಕರ್ಮಿ ನಿರ್ದೇಶಕ ಪ್ರಸಾದ್ ರಕ್ಷಿದಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಸಕಲೇಶಪುರ ತಾಲ್ಲೂಕಿನ ಹೆಮ್ಮೆಯ ಪುತ್ರ, ಮಹಾನ್ ಮಾನವತಾವಾದಿ, ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿದ ಎಸ್.ಕೆ. ಕರೀಂಖಾನ್ ಅವರ ಹೆಸರಿನಲ್ಲಿ ಒಂದು ಪ್ರಶಸ್ತಿಯನ್ನು ಸ್ಥಾಪಿಸಿ ಕರ್ನಾಟಕದ ಹಿರಿಯ ಜನಪರ ಧೀಮಂತರೊಬ್ಬರಿಗೆ ಅದನ್ನು ನೀಡಿ ಗೌರವಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಮಾರ್ಚ್ 8 ರಂದು ಕಾರ್ಯಕ್ರಮ ಜರುಗಲಿದೆ. ಲಂಕೇಶ್ ಅವರ ಜನ್ಮದಿನಾಚರಣೆಯೊಂದಿಗೆ ನಡೆಯಲಿದೆ. ಕಾರ್ಯಕ್ರಮದ ನಂತರ ಲಂಕೇಶ್ ವಿರಚಿತ ನಾಟಕ ಪ್ರದರ್ಶನವಿದೆ ಎಂದರು. ಜೈ ಕರ್ನಾಟಕ ಸಂಘವು ರಕ್ಷಿದಿಯಂತಹ ಮಲೆನಾಡಿನ ಅತಿ ಸಣ್ಣ ಹಳ್ಳಿಯಲ್ಲಿ ‘ಪೂರ್ಣಚಂದ್ರ ತೇಜಸ್ವಿ ಸಾಂಸ್ಕöÈತಿಕ ಕೇಂದ್ರ’ವನ್ನು ಸ್ಥಾಪಿಸಿ ಕಳೆದ ನಲುವತ್ತಾರು ವರ್ಷಗಳಿಂದ ನಿರಂತರವಾಗಿ ರಂಗ ಚಟುವಟಿಕೆಯೂ ಸೇರಿದಂತೆ ಸಾಂಸ್ಕöÈತಿಕವಾಗಿ ರಂಗ ಭೂಮಿ, ಕಲೆ, ಸಾಹಿತ್ಯ, ಆರೋಗ್ಯ, ಸಾಕ್ಷರತೆ, ಕೃಷಿ, ಪರಿಸರ ಸಂರಕ್ಷಣೆಯತಹ ಕಾಯಕಗಳ ಜೊತೆಗೆ ಜನಪರ ಹೋರಾಟಗಳನ್ನೂ ರೂಪಿಸುತ್ತ ಬಹುಮುಖಿ ಕಾರ್ಯಕ್ರಮ ಗಳನ್ನು ನಡೆಸುತ್ತ ಬಂದಿರುವ ಸಂಸ್ಥೆಯಾಗಿದೆ ಎಂದು ಹೇಳಿದರು.
ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿದ ಎಸ್.ಕೆ. ಕರೀಂಖಾನ್ ಅವರ ಸ್ಥಾಪಿಸಿ ಕರ್ನಾಟಕದ ಹಿರಿಯ ಜನಪರ ಧೀಮಂತರೊಬ್ಬರಿಗೆ ಅದನ್ನು ನೀಡಿ ಗೌರವಿಸುವ ಉದ್ದೇಶವನ್ನು ಹೊಂದಿದ್ದೇವೆ. ಹಾಗೂ ಇದರ ಜೊತೆ ಯಲ್ಲಿಯೇ ಸಣ್ಣ ವಯಸ್ಸಿನಲ್ಲಿ ಅಪಾರ ಪ್ರತಿಭೆ ಹಾಗೂ ಜನಪರ ಕಾಳಜಿಯನ್ನು ತೋರಿ ಬಹುಬೇಗ ನಮ್ಮನ್ನು ಅಗಲಿದ ‘ಅಮೃತಾರಕ್ಷಿದಿ’ ಹೆಸರಿನಲ್ಲಿ ಕನ್ನಡದ ಇಬ್ಬರು ಯುವ ಪ್ರತಿಭೆಗಳಿಗೆ ಪುರಸ್ಕಾರ ನೀಡುವ ಕಾರ್ಯಕ್ರಮವೂ ಇದೆ. ಇದು ಪ್ರತಿವರ್ಷ ಮುಂದುವರೆಯಲಿದೆ. ಈ ವರ್ಷದ ಪ್ರಶಸ್ತಿ ಪುರಸ್ಕöÈತರ ಆಯ್ಕೆಗಾಗಿ ನಮ್ಮ ಮನವಿಯ ಮೇರೆಗೆ, ಡಾ.ಹಿ.ಚಿ.ಬೋರಲಿಂಗಯ್ಯ ಡಾ ಹೆಚ್. ಆರ್.ಸ್ವಾಮಿ. ಹಾಗೂ ಹಿರಿಯ ಪತ್ರಿಕಾ ಸಂಪಾದಕ, ಕವಿ ಚ.ಹ.ರಘು ನಾಥ್ ಅವರನ್ನೊಳಗೊಂಡ ಸಮಿತಿ ಯು ಈ ಆಯ್ಕೆಗಳನ್ನು ಮಾಡಿದೆ.
“ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ’ಗೆ, ಹರಪನ ಹಳ್ಳಿಯ ಬಿ.ಪರಶು ರಾಮ್ ಅವರು ಪಾತ್ರರಾಗಿದ್ದಾರೆ. 1956 ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಬಿ.ಪರಶುರಾಮ್ ಅವರು ಸಾಮಾಜಿಕ ಬದ್ಧತೆಯೊಂದಿಗೆ ನಿರಂತರವಾಗಿ ಜನಪರ ಹೋರಾಟ ಗಳಲ್ಲಿಯೂ ಭಾಗಿಯಾಗುತ್ತ ಬಂದವರು. ಮೂಡಲ ಪಾಯ ಯಕ್ಷಗಾನ ಹಾಗೂ ಆಧುನಿಕ ರಂಗ ಭೂಮಿ ಹೀಗೇ ಎರಡೂ ಕ್ಷೇತ್ರಗಳಲ್ಲಿ ನಿರಂತರವಾಗಿ ದುಡಿಯುತ್ತ ಬಂದವರು. ಹರಪನ ಹಳ್ಳಿಯಲ್ಲಿ ?ಸಮಸ್ತರು’ ಎಂಬ ಸಾಂಸ್ಕöÈತಿಕ ಸಂಸ್ಥೆ ಯನ್ನು ಕಟ್ಟಿಕೊಂಡು ರಂಗ ಕಾಯಕ ವನ್ನು ಮುಂದು ವರೆಸಿದ್ದಾರೆ. ಈಗಾಗಲೇ ಹಲವು ಗೌರವಗಳನ್ನು ಪಡೆದಿರುವ ಬಿ.ಪರಶುರಾಮ್ ಅವರಿಗೆ ಈಗ ಎಸ್.ಕೆ. ಕರೀಂಖಾನ್ ಪ್ರಶಸ್ತಿಯ ಗರಿ. “ಅಮೃತಯಾನ” ಎಂಬ ಆತ್ಮಕಥೆಯ ಮೂಲಕ ನಾಡಿನ ಗಮನ ಸೆಳೆದ, ಜೊತೆಗೆ ಚಿತ್ರಕಲಾವಿದೆಯಾಗಿ, ರಂಗ ಕರ್ಮಿಯಾಗಿ,ಸಾಮಾಜಿಕ ಚಿಂತಕಿ ಯಾಗಿ ಸಣ್ಣ ವಯಸ್ಸಿನಲ್ಲಿಯೇ ಬಹು ಮುಖ ಪ್ರತಿಭೆಯನ್ನು ತೋರಿ ನಮ್ಮನ್ನು ಅಗಲಿದ. ಅಮೃತಾ ರಕ್ಷಿದಿ ನೆನಪಿನಲ್ಲಿ ನೀಡುವ “ಅಮೃತ ಕಾವ್ಯ ಪ್ರಶಸ್ತಿ’ ಪ್ರಶಸ್ತಿ ಗಾಗಿ ಈ ಇಬ್ಬರು ಯುವ ಪ್ರತಿಭಾ ವಂತರನ್ನು ಆಯ್ಕೆ ಮಾಡಿದೆ ಎಂದರು