ವಿಶ್ವಪಥ ವಿಶೇಷ

ಇವು ನಮ್ಮ ಸರ್ಕಾರಿ ಶಾಲೆ,,,
ಹೌಲ ಕುಚ್ಚು ಪಾಟ್ಲಾಕು ರಹು ಮುಂತಾದ ದೊಡ್ಡ ದೊಡ್ಡ ಮೀನುಗಳನ್ನು ಮೊದಲೇ ಹಿಡಿದು ತಿಂದ ಖಾಸಗಿ,,,
ಶಾಲೆಗಳು, ಈ ಖಾಸಗಿ ಶಾಲೆಗಳ ಬಗ್ಗೆ ಮಾತನಾಡಲು ಧೈರ್ಯ ಯಾರಿಗಿದೆ?
ನಿವೃತ್ತ ರಾಜಕಾರಣಿಗಳು ಮಂತ್ರಿಗಳು ದೊಡ್ಡ ದೊಡ್ಡ ನಿವೃತ್ತ ಅಧಿಕಾರಿಗಳು ತಮ್ಮ ಕಡೆಯ ದಿನಗಳಿಗೆ ಆಧಾರವಾಗಿರಲೆಂದು ಸರ್ಕಾರದೊಂದಿಗೆ ಮಾತನಾಡಿದ ಉತ್ತಮವಾದ ಆಯಕಟ್ಟಿನ ಜಾಗದಲ್ಲಿ ಕಟ್ಟಿಕೊಂಡಿರುವ ಖಾಸಗಿ ನಾಲಂತ ತಕ್ಷಶಿಲಾದಂತ ವಿಶ್ವವಿದ್ಯಾಲಯಗಳು 🙄🙄🙄 ಈ ಮೇಲೆ ಹೇಳಿದ ದೊಡ್ಡ ದೊಡ್ಡ ಕೂಳಿಗಳಿಂದ ತಪ್ಪಿಸಿಕೊಂಡು ಆಟವಾಡುತ್ತಿದ್ದ ಪ್ರತಿಭಾವಂತ ಮಕ್ಕಳೆಲ್ಲ ಪರೀಕ್ಷೆ ಬರೆದು ನವೋದಯ,ಮುರಾರ್ಜಿ,ಕಸ್ತೂರಿ ಬಾ, ರಾಣಿ ಚೆನ್ನಮ್ಮ,ಆದರ್ಶ,ಅಲ್ಪಸಂಖ್ಯಾತ ಸೈನಿಕ ಮುಂತಾದ ಸನಿವಾಸ ಶಾಲೆಗಳ ಪಾಲಾದರು,
ಈಗ ಸರ್ಕಾರಿ ಶಾಲೆಯಲ್ಲಿ ಉಳಿದಿರುವ ಮಕ್ಕಳೆಂದರೆ ಕೂಲಿ ಕಾರ್ಮಿಕರು ಬೀದಿ ಬದಿಯ ವ್ಯಾಪಾರಿಗಳು ಆರ್ಥಿಕವಾಗಿ ಅಭಲಸ್ತರಾಗಿರುವವರು,ವಲಸೆ ಕಾರ್ಮಿಕರು ಶಿಕ್ಷಣದ ಮಹತ್ವವೇ ಅವರಿಗೆ ತಿಳಿಯದ ಪೋಷಕರಿಂದ ಬರಲ್ಪಟ್ಟ ಆ ಮಕ್ಕಳು ಈಗ ನಮಗೆ ಕರ್ಮಿನು ಸೀಗಡಿಗಳಂತವರು, ಅವರಲ್ಲಿ ಆತ್ಮವಿಶ್ವಾಸ ತುಂಬಿ ಪುನರುಬಲನಗೊಳಿಸಿ ಮುಖ್ಯ ವಾಹಿನಿಗೆ ತರುವುದು ಎಂದರೆ ಆ ಶಿಕ್ಷಕನಿಗೆ ತನ್ನ ಜೀವಿತದ ಅವಧಿಯಲ್ಲಿ ಎದುರಾದ ಅತಿ ದೊಡ್ಡ ಟಾಸ್ಕ್,, ಓದಿ ವೃತ್ತಿ ಪಡೆಯಲು ಅಷ್ಟೊಂದು ಕಷ್ಟಪಟ್ಟು ಇರುವುದಿಲ್ಲ ಆದರೆ ಆ ವೃತ್ತಿಯನ್ನು ಉಳಿಸಿಕೊಳ್ಳಲು ಅವನು ಎಡಗಾಡುತ್ತಿರುವುದನ್ನು ನೋಡಿದಾಗ ಎಂತಹವರಿಗೂ ಅಯ್ಯೋ ಎನಿಸದೇ ಇರದು,
ನಿಜವಾಗಿಯೂ ಭೂಮಿ ತಾಯಿಯ ಚೊಚ್ಚಲ ಮಕ್ಕಳು ಇವರೇ ಇವರನ್ನು ಕಟ್ಟಿಕೊಂಡು ಲಕ್ಷ ಲಕ್ಷ ಕೋಟಿ ಖರ್ಚು ಮಾಡಿ 64 ವಿದ್ಯೆಗಳಲ್ಲಿಯೂ ಪಾರಂಗತರಾಗಿರುವ ಕಾರ್ಪೊರೇಟ್ ವಲಯಕ್ಕೆ ಸಿದ್ದರಾಗುತ್ತಿರುವ ಆ ಪನ್ಟರ ಜೊತೆ ಜೊತೆ ಸ್ಪರ್ಧೆಗೆ ನಿಲ್ಲಿಸುವುದು ಎಂದರೆ ಆರನೇ ತಲಮಾರಿನ ಕ್ಷಿಪಣಿಗಳನ್ನು ಹೊಂದಿರುವ ದೇಶದ ಮೇಲೆ ಬಡ ರಾತ್ರಿ ಬಂದು ಯುದ್ಧಕ್ಕೆ ನಿಂತಂತಾಗಿದೆ,,
ಶಿಕ್ಷಕರಿಂದ ಶಾಲೆಯಲ್ಲಿ ಉಳಿಯುತ್ತಿಲ್ಲ,, ಯಾವಾಗ ನೋಡಿದರೂ ಕೈಯಲ್ಲೊಂದು ಬ್ಯಾಗು ಹಿಡಿದು ತರಕಾರಿ ಬಾಳೆಹಣ್ಣು ಕಡಲೆ ಮಿಠಾಯಿ,,,ಜೆರಾಕ್ಸ್ ಕಾಪಿಗಳು,,ಆದೇಶಗಳು,, ಮಾಹಿತಿಗಳು ಒಂದೇ ಎರಡೇ,,,

ಶಾಲೆಗಳು ಒಂದು ರೀತಿಯಲ್ಲಿ ಬಾಲ ಕ್ಯಾಂಟೀನ್ ಆಗಿದೆ, ಬೆಳಿಗ್ಗೆ ಹಾಲಿನಿಂದ ಪ್ರಾರಂಭವಾಗಿ ಮಧ್ಯಾಹ್ನ ಊಟ ಕೊಡುವಾಗ ಒಬ್ಬ ಮೊಟ್ಟೆಗೆಂದು ಬರಸಿರುತ್ತಾನೆ, ಅರ್ಧ ಗಂಟೆಗೆ ಆಗಲೇ ಬಾಳೆಹಣ್ಣಿಗೆ ಪಕ್ಷಾಂತರ ಮಾಡುತ್ತಾನೆ. ಬಾಳೆಹಣ್ಣಿನ ಆದರೂ ಸೈಜ್ ಕಡಿಮೆಯಾಗಿದ್ದರೆ ನನಗೆ ಮೊಟ್ಟೆಯನ್ನೇ ಕೊಡಿ ಎಂದು ಹಠ ಮಾಡುತ್ತಾನೆ,ಮೊಟ್ಟೆ ಇಲ್ಲ ಎಂದರೆ ಚಿಕ್ಕಿಗೆ ಜಜೋತು ಬೀಳುತ್ತಾನೆ,,
ಅವರನ್ನು ಸಂಬಾಳಿಸಿ ಅವರಿಗೆ ಪಾಠ ಮಾಡಿ ಮನೆಗೆ ಬರುವ ವೇಳೆಗೆ ಆಗಲೇ ಶಿಕ್ಷಕರುಗಳಿಗೆ ಪೋಷಕರಿಂದ ಫೋನು,,ನಮ್ಮ ಹುಡುಗ ಹಾಲು ಕುಡಿದು ಇವತ್ತು ಜ್ವರ ಬರಿಸಿಕೊಂಡಿದ್ದಾನೆ,,ಬಾಳೆಹಣ್ಣು ತಿಂದಿದ್ದರಿಂದ ಹುಷಾರ್ ತಪ್ಪಿದೆ,,ಮೊಟ್ಟೆ ಕೊಡಬಾರದಿತ್ತು.
ಈಗ ನಾವೇನು ಮಾಡಲಿ,, ಅಕ್ಕಿ ಜ್ವರ ಬಂದಿದೆಯಂತೆ ಮೊಟ್ಟೆ ಕೊಟ್ಟರೆ ಏನು ಆಗಲ್ವಾ?
ಈಗ ಬಿಪಿ ಶುಗರ್ರು ಬರುವುದು ಶಿಕ್ಷಕರಿಗೆ,,
ಪೋಷಕರನ್ನ ಕಾಲಕಾಲದಲ್ಲಿ ಯಾಮಾರಿಸುತ್ತಿರುವ ಖಾಸಗಿ ಶಾಲೆಗಳು
ನಮ್ಮದು ಸ್ಟೇಟ್ ಸಿಲಬಸ್ ಅಲ್ಲ,ಸಿಬಿಎಸ್ಸಿ ಐಸಿಎಸ್ಸಿ,, ಇನ್ನು ಯಾವ್ಯಾವ ಸಿಸಿಗಳಿವೆಯೋ
ಹೀಗೆ ಸಮಾಜವನ್ನ ಸಿಲಬಸ್ ಗಳ ಮೂಲಕ ಕರಿಕ್ಯುಲಂ ಗಳ ಮೂಲಕ ಹೊಡೆಯುತ್ತಾ ಹೋದರೆ ಇನ್ನು ಎಷ್ಟು ದಿನ ಮನೆ ಮುರುಕ ಕೆಲಸವನ್ನ ಮಾಡುತ್ತಾ ಅದಕ್ಕೆ ಸಹಕಾರ ನೀಡುತ್ತಾ ಹೋಗಬೇಕು ಸರ್ಕಾರಗಳು,,?
ಸಮ ಸಮಾಜದ ಪ್ರಶ್ನೆ ಎಲ್ಲಿಗೆ ಹೋಗಿ ನಿಲ್ಲುತ್ತದೆ?
ಪ್ರತಿಶತ 50ರಿಂದ 60 ಪರ್ಸೆಂಟ್ ಅವಲಂಬತವಾಗಿರುವ ವೃತ್ತಿ ಆಧಾರಿತ ಗ್ರಾಮ ಪರಿಸರಕ್ಕೆ ಸಂಬಂಧಪಟ್ಟ ಸಿಲಬಸ್ ಗಳನ್ನು ಬಿಟ್ಟು ಯಾವುದೋ ದೇಶದಲ್ಲಿ ಅನ್ನ ಹುಟ್ಟಿಸುತ್ತೇವೆಂಬ ಭ್ರಮೆಯನ್ನು ಸೃಷ್ಟಿಸಿ ಪರದೇಶಿಗಳನ್ನಾಗಿ ಮಾಡಲು ಹೊರಟಿರುವ ನಮ್ಮದಲ್ಲದ ವಸ್ತು ವಿಚಾರಗಳನ್ನು ನಮ್ಮ ತಲೆಗೆ ತುಂಬುತ್ತಾ ಹೃದಯವನ್ನು ಮುಚ್ಚಿ ಬ್ರೈನ್ನ್ನ ಓಪನ್ ಮಾಡಿ ಫಸ್ಟ್ ರಾಂಕ್ ರಾಜರನ್ನು ಸೃಜಿಸುತ್ತಿರುವ ಇಂದಿನ ಶಿಕ್ಷಣ ವ್ಯವಸ್ಥೆಗೆ ಅಂತ್ಯ ಹಾಡದಿದ್ದರೆ ನಾವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಅಪಾರ ಎನ್ನುವುದನ್ನು ಕೆಲವೇ ದಿನಗಳಲ್ಲಿ ನಾವು ಅನುಭವಿಸಬೇಕಾಗುತ್ತದೆ,, ಶಿಕ್ಷಣದ ಬಗ್ಗೆ ಒಂದು ಅಂಶದ ಅರಿವು ಇರದವರು ಅಂಕಿ ಅಂಶಗಳನ್ನು ಇಟ್ಟುಕೊಂಡು ತಮಗೆ ತೋಚಿದ್ದನ್ನು ಮಾತನಾಡುತ್ತಾರೆ, ಅಲ್ಲಿಯ ಹುಳುಕುಗಳು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೊತ್ತಿರುವಷ್ಟು ಹೊರಗಿನವರಿಗೆ ತಿಳಿದಿರಲಾರದು.
ಬಿ.ಡಿ ಶಂಕರೇಗೌಡರು