
ಕ್ಯೂಬಾದಲ್ಲಿ ಜನವರಿ 28ರಿಂದ 30ವರೆಗೆ ನಡೆಯಲಿರುವ 6ನೇ ವಿಶ್ವ ಸಮತೋಲನ ಸಮ್ಮೇಳನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ.ಅನಿಲ್ ಕುಮಾರ್ ಆಯ್ಕೆಯಾಗಿದ್ದು, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಎಂ ಪಿ ಮುನಿವೆಂಕಟಪ್ಪ ತಿಳಿಸಿದರು.
“ಕ್ಯೂಬಾದಲ್ಲಿ ಆಡಳಿತದಲ್ಲಿರುವ ಕಮ್ಯೂನಿಸ್ಟ್ ಸರ್ಕಾರ ಪ್ರತಿ ಎರಡು ವರ್ಷಕ್ಕೊಮ್ಮೆ ದೇಶದ ವ್ಯವಸ್ಥೆ, ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಉದ್ಯೋಗ, ತರಕಾರಿ ಬೆಳೆಯುವ ಪದ್ಧತಿ ಹಾಗೂ ರಾಜಕಾರಣದ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸುತ್ತಿದೆ” ಎಂದು ಅನಿಲ್ಕುಮಾರ್ ಹೇಳಿದರು.
ಈ ವೇಳೆ ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಿದ್ದಗಂಗಪ್ಪ, ಸದಸ್ಯರಾದ ಬಿಳ್ಳೂರು ನಾಗರಾಜ್, ಜಯರಾಮ ರೆಡ್ಡಿ, ತಾಲೂಕು ಕಾರ್ಯದರ್ಶಿ ಎಂ ಎನ್ ರಘುರಾಮರೆಡ್ಡಿ, ಬಿ ಎನ್ ಮುನಿಕೃಷ್ಣಪ್ಪ, ಚನ್ನರಾಯಪ್ಪ, ನಗರ ಸಮಿತಿಯ ಅಶ್ವಥ್ಥಪ್ಪ, ಜಿ ಕೃಷ್ಣಪ್ಪ, ಮುಸ್ತಾಫ್, ಬಿ ಎಚ್ ರಫೀಕ್ ಇದ್ದರು.