
ಪರಿಶಿಷ್ಟ ಜಾತಿಯ ಹೊಲೆಯ, ಮಾಲದಾಸರ ಅಲೆಮಾರಿ ಚೆನ್ನದಾಸರ ಸಮುದಾಯಕ್ಕೆ ಶೇ.3ರಷ್ಟು ಮೀಸಲಾತಿ ಕಲ್ಪಿಸಿಕೊಡಲು ಚನ್ನದಾಸರ ಬಳ್ಳಾರಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಡಿ ರಂಗಯ್ಯ ಬಳ್ಳಾರಿ ಜಿಲ್ಲಾಧಿಕಾರಿ ಮೂಲಕ ಎಚ್ ಎನ್ ನಾಗಮೋಹನದಾಸ್ ಅವರಿಗೆ ಮನವಿ ಸಲ್ಲಿಸಿದರು.
“ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ವರದಿಯ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಸುಪ್ರೀಂ ಕೋರ್ಟ್ನ ಏಳು ಜನ ಮುಖ್ಯ ನ್ಯಾಯಾಧೀಶರು ಆದೇಶ ನೀಡಿ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಚನ್ನದಾಸರ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಶೇ.3ರಷ್ಟು ಮೀಸಲು ನೀಡಬೇಕು” ಎಂದು ಒತ್ತಯಿಸಿದರು.
“ಪರಿಶಿಷ್ಟ ಜಾತಿಯಲ್ಲಿ ಬರುವ ಅಲೆಮಾರಿ ಸಮುದಾಯದ ಚನ್ನದಾಸರ, ವಲಯದಾಸರ, ಬಾಲದಾಸರ ಜಾತಿಗಳು ಅಲೆಮಾರಿ ಜನಾಂಗದಲ್ಲಿದ್ದು , ಆ ಜಾತಿಗಳಿಗೆ ಕಲ್ಪಿಸಿರುವ ಮೀಸಲಾತಿ ಯಾವುದಕ್ಕೂ ಸಾಲುವುದಿಲ್ಲ. ಅಲೆಮಾರಿ ಜನಾಂಗದಲ್ಲಿ ಅಲೆಮಾರಿ ಸಮುದಾಯದಲ್ಲಿ ಬರುವ ಚನ್ನದಾಸರ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಒಳಮೀಸಲಾತಿಯಲ್ಲಿ ಶೇ.3ರಷ್ಟ ನಿಗದಿಪಡಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚನ್ನದಾಸರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಹದೇವಪ್ಪ ಅಧ್ಯಕ್ಷ ಡಿ ಮಂಜುನಾಥ್,
ಉಪಾಧ್ಯಕ್ಷ ಏರಿಸ್ವಾಮಿ, ಡಿ ರಾಮಯ್ಯ, ಡಿ ರಂಗಣ್ಣ, ಡಿ ರಾಮಣ್ಣ, ಡಿ ಲಕ್ಷ್ಮಣ ಸೋಮಶೇಖರ್ ಸೇರಿದಂತೆ ಬಹುತೇಕರು ಇದ್ದರು.