ಬೇಲೂರು ತಾಲ್ಲೂಕಿನ ಮಾದೀಹಳ್ಳಿ ಹೋಬಳಿ ಜೈನರಗುತ್ತಿಯಲ್ಲಿ ನಡೆಯುವ ಪಂಚ ಕಲ್ಯಾಣೋತ್ಸವ ಕಾರ್ಯ ಕ್ರಮಕ್ಕೆ ಆಗಮಿಸಿದ ಪೂಜ್ಯ ಶ್ರೀ ಡಾ.ಡಿ. ವಿರೇಂದ್ರ ಹೆಗ್ಗಡೆರವರು ಮತ್ತು ಪುಷ್ಪಗಿರಿ ಜಗದ್ಗುರುಗಳು ಮಾತನಾಡಿದರು.“ಧರ್ಮಸ್ಥಳ ಧರ್ಮೋತ್ಥಾನ ಸಂಸ್ಥೆಯಿಂದ ಶೀಘ್ರವೇ ಅಧ್ಯಯನ ಪೀಠ ಸ್ಥಾಪನೆ”
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಹೆಚ್ಚು-ಹೆಚ್ಚು ಪುರಾತನ ಮತ್ತು ಐತಿಹಾಸಿಕ ವಿಗ್ರಹಗಳು ಲಭ್ಯವಾಗು ತ್ತಿರುವ ಹಿನ್ನಲೆಯಲ್ಲಿ ಇಲ್ಲಿಯೇ ಸಂಶೋಧನೆ ನಡೆಸಲು ಅನುವು ಮಾಡಲು ಧರ್ಮಸ್ಥಳ ಧರ್ಮೋತ್ಥಾನ ಸಂಸ್ಥೆಯಿಂದ ಶೀಘ್ರವೇ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾ ಧಿಕಾರಿ ಪೂಜ್ಯ ಶ್ರೀ ಡಾ.ವಿರೇಂದ್ರ ಹೆಗ್ಗಡೆ ಯವರು ಹೇಳಿದರು. ಪುಷ್ಪಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯರ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳ ಮಾತನಾಡಿ, ಸುಮಾರು ೯೦೦ ವರ್ಷಗಳ ಗತವೈಭವ ಸಾರುವ ಜೈನರಗುತ್ತಿ ಕ್ಷೇತ್ರದ ಸಕಲ ಅಭಿವೃದ್ಧಿಗೆ ಇಲ್ಲಿನ ಪೂಜ್ಯ ಶ್ರೀ ವೀರಸಾಗರಮುನಿ ಗಳು ಶ್ರಮಿಸಿದ್ದಾರೆ. ವಿಶೇಷವಾಗಿ ಹಳೇಬೀಡು ಸುತ್ತ-ಮುತ್ತಲು ಇಂದಿಗೂ ಜಿನಮೂರ್ತಿಗಳು ಮಣ್ಣಿನಲ್ಲಿ ಲಭ್ಯವಾಗು ತ್ತಿರುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ ವಿದೆ.ಈಗಾಗಲೇ ಧರ್ಮಸ್ಥಳ ಧರ್ಮಾಧಿ ಕಾರಿ ಪೂಜ್ಯ ಶ್ರೀ ವಿರೇಂದ್ರ ಹಗ್ಗೆಡೆಯವರು ಧರ್ಮಸ್ಥಳ ಧರ್ಮೋತ್ಥಾನ ಸಂಸ್ಥೆ ಸ್ಥಾಪಿಸಿ ಈಗಾಗಲೇ ನೂರಾರು ದೇಗುಲ ಮತ್ತು ಸಾವಿರಾರು ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಅವರು ಕಾರ್ಯ ನಿಜಕ್ಕೂ ಮೆಚ್ಚುವ ಕೆಲಸ ಮಾಡಿದ್ದಾರೆ. ಧರ್ಮಸ್ಥಳದಲ್ಲಿ ಸತ್ಯ,ನ್ಯಾಯ.ನೀತಿ, ದಾಸೋಹವನ್ನು ನಡೆಸುತ್ತಿರುವ ಪೂಜ್ಯರ ಕೆಲಸ ಅಗಮ್ಯವಾಗಿದೆ ಎಂದರು.,