ತೀವ್ರ ಜಿದ್ದಾಜಿದ್ದಿ ಹಾಗೂ ಪೈಪೋಟಿ ಪಡೆದುಕೊಂಡಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ನಡೆಯುತ್ತಿದ್ದು ಫಲಿತಾಂಶ ರಾತ್ರಿವೇಳೆಗೆ ಪ್ರಕಟವಾಗಲಿದೆ.ನಗರದ ಆರ್.ಸಿ.ರಸ್ತೆಯಲ್ಲಿ ನೌಕರರ ಸಂಘದಲ್ಲಿ ಬೆಳಗೆ 9 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು ಸಂಜೆ 4 ಗಂಟೆವರೆಗೆ ನಡೆಯಲಿದೆ . ಆ ನಂತರ ಮತ ಎಣಿಕೆ ನಡೆಯಲಿದ್ದು, ರಾತ್ರಿ ವೇಳೆಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೆ.ಎಂ. ಶ್ರೀನಿವಾಸ್ ಮತ್ತು ಬಿ.ಪಿ.ಕೃಷ್ಣಗೌಡ ಸ್ಪರ್ಧೆ ಮಾಡಿದರೆ, ಖಜಾಂಚಿ ಸ್ನಾನಕ್ಕೆ ಎಸ್.ಮಧು ಮತ್ತು ಕೆ.ಆರ್.ಹೇಮಂತ್ ಹಾಗೂ ರಾಜ್ಯ ಪರಿಷತ್ ಸ್ನಾನಕ್ಕೆ ಟಿ.ರಾಜು ಹಾಗೂ ಟಿ.ಮಂಜುನಾಥ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆ.ಎಂ. ಶ್ರೀನಿವಾಸ್, ರಾಜು ಟಿ., ಮಧು ಎಸ್ ಹಾಗೂ ಬಿ.ಪಿ.ಕೃಷ್ಣಗೌಡ, ಕೆ.ಆರ್.ಹೇಮಂತ್ ಮತ್ತು ಟಿ.ಮಂಜುನಾಥ್ ನಡುವೆ ಮೂರು ಸ್ನಾನಗಳ ಆಯ್ಕೆಗೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಈಗಾಗಲೇ ಎರಡೂ ಕಡೆಯವರು ಸಾಕಷ್ಟು ಪ್ರಚಾರ ಮಾಡಿದ್ದು, ಗೊರೂರು ಉಪ ವಿಭಾಗ ಸೇರಿದಂತೆ ತಾಲೂಕುಗಳ 8 ಮಂದಿ ನಿರ್ದೇಶಕರು ಹಾಗೂ ನಗರ ವ್ಯಾಪ್ತಿಯ 66 ನಿರ್ದೇಶಕರು ಮತದಾನ ಮಾಡುವ ಅವಕಾಶ ಪಡೆದಿರುವ ಒಟ್ಟು 74 ಮಂದಿ ನಿರ್ದೇಶಕರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ, ಮಾಡುತ್ತಲೂ ಇದ್ದಾರೆ.ನಮಗೆ ವಾತಾವರಣ ಚೆನ್ನಾಗಿದೆ, ನಾವೇ ಗೆಲುವು ಸಾಧಿಸುತ್ತೇವೆ ಎಂದು ಶ್ರೀ ನಿವಾಸ್ ಮತ್ತವರ ಬಣ ಹೇಳುತ್ತಿದ್ದರೆ, ನಮಗೂ ನಮ್ಮ ತಂಡ ಗೆಲ್ಲುವ ವಾತಾವರಣ ಇದೆ ಎಂದು ಕೃಷ್ಣಗೌಡ ಮತ್ತವರ ಕಡೆಯರು ಹೇಳುತ್ತಿದ್ದಾರೆ. ಹೀಗಾಗಿ ನಾಳಿನ ಚುನಾವಣೆಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಸಹಜವಾಗಿಯೇ ಕುತೂಹಲ ಮೂಡಿದೆ.