
ಹಾಸನ: ಕೇಂದ್ರದ ಬಿಜೆಪಿ ಒಕ್ಕೂಟ ಸರ್ಕಾರದಿಂದ ಜಾರಿಗೊಳಿಸಲು ಹೊರಟಿರುವ ವಕ್ಸ್ ಮಸೂದೆ -2024 ಕೇಂದ್ರ ಸರಕಾರದ ವಿರುದ್ಧ ಮಾರ್ಚ್ 1ರ ಶನಿವಾರದಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುಬಷೀರ್ ಅಹಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಸಂವಿಧಾನ ವಿರೋಧಿ ಹಾಗೂ ಮುಸ್ಲಿಮರ ಅಸ್ಮಿಯತೆಯ ಪ್ರಶ್ನೆಯಾಗಿದೆ. 2014 ರಿಂದ ಆಡಳಿತಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಮುಸ್ಲಿಮರ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿದೆ.ಎನ್ ಆರ್.ಸಿ. /ಸಿಎಎ ತ್ರಿಬಲ್ ತಲಾಖ್, 2ಬಿ ರಿಸೆರ್ವೆಶನ್, ಹಿಜಾಬ್, ಬಾಬ್ರಿ ಮಸೀದಿ, ಇದಲ್ಲದೆ ದೇಶದ ಹಲವು ಮಸೀದಿ ಸ್ಥಳಗಳಲ್ಲಿ ದೇವಸ್ಥಾನ ವೆಂಬ ಸುಳ್ಳು ಆಪಾದನೆಗಳು ಹೋರಿಸಿಕೊಂಡು ದ್ವೇಷದ ರಾಜಕೀಯ ಮುಂದುವರಿಸಿ ದೇಶದ ಶಾಂತಿಯನ್ನು ಕದಡುತ್ತಿದೆ. ಇದು ಮುಂದುವರಿದ ಬಾಗವಾಗಿ ಈಗ ಅಸಂವಿಧಾನಿಕಾ ವಕ್ಫ್ ಮಸೂದೆ -2024ನ್ನು ಜಾರಿ ಮಾಡಲು ಹೊರಟಿದೆ ಎಂದು ದೂರಿದರು. ಈ ದೇಶದ ಕೋಟ್ಯಂತರ ಮುಸ್ಲಿಮರಲ್ಲಿ ಯಾರೊಬ್ಬ ಪ್ರಜೆಯಾಗಲಿ ಸಂಸದನಾಗಲಿ ರಾಜ್ಯಸಭಾ ಸದಸ್ಯರಗಲಿ ಈ ಮಸೂದೆ ಜಾರಿ ಮಾಡಿ ಎಂದು ಹೇಳಿಲ್ಲ. ಜೆಪಿಸಿ ಸಮಿತಿಯಲ್ಲೂ ಯಾರ ಒಪ್ಪಿಗೆ ಗಣನೆಗೆ ತೆಗೆದುಕೊಳ್ಳದೆ ಬಿಲ್ ಜಾರಿ ಮಾಡಲು ಹೊರಟಿರುವುದು ಅನ್ಯಾಯ, ಅಸಂವಿಧಾನಿಕಾ ಮತ್ತು ಆರ್ ಎಸ್ ಎಸ್ ಹಿಂದುತ್ವ ಅಜೆಂಡದಾ ಬಾಗವಾಗಿದೆ ಎಂದರು.
ವಕ್ಸ್ ಅಂದರೆ ದಾನ, ದೇಣಿಗೆ ನೀಡುವುದು ಪುರಾತನ ಕಾಲದಲ್ಲಿ ಹಳ್ಳಿಗಳಲ್ಲಿದ್ದ ಶ್ರೀಮಂತರು ಮಸೀದಿ, ಮದ್ರಸ, ಈದ್ ಗಾ, ಕಬ್ರಸ್ತಾನ್, ಆಸ್ಪತ್ರೆ ಇತ್ಯಾದಿಗಳಿಗೆ ವಕ್ಸ್ ಮಾಡುತ್ತಿದ್ದರು ಇದು ಸಮುದಾಯದ ಏಳಿಗೆಗಾಗಿ ಮತ್ತು ಮುಂದಿನ ಪೀಳಿಗೆಗಳಿಗೆ ಉಪಯೋಗ ವಾಗುವುದಕ್ಕೆ ದಾನ ಅಥವಾ ದೇಣಿಗೆ ನೀಡುತ್ತಿದ್ದರು. ಇದು ಯಾವುದೇ ಸರ್ಕಾರ ಅಥವಾ ಇನ್ನಿತರಹ ಸಮುದಾಯಗಳು ನೀಡಿದ್ದು ಅಲ್ಲ. ಹಾಗಾಗಿ ವಕ್ಫ್ ಮಸೂದೆ ತಿದ್ದುಪಡಿ ಮಾಡಲು ಈ ದೇಶದ ಮುಸ್ಲಿಮರು ಸಂವಿಧಾನ ಬದ್ಧ ಹೋರಾಟ ಮಾಡುವರು. ಈ ಮಸೂದೆಯ ಮೂಲಕ ವಕ್ಸ್ ಬೋರ್ಡ್ ಮೇಲೆ ಹಿಂದೂತ್ವ ಆದರ್ಶಗಳನ್ನು ಬಲಾತ್ಕಾರವಾಗಿ ಹೇರಲು ಯತ್ನಿಸುತ್ತಿದೆ. ಇದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ನಾಯತ್ತತೆಗೆ ವಿರುದ್ಧವಾದದ್ದು. ತಿದ್ದುಪಡಿಯ ಹಿಂದಿನ ಅಸಲಿ ಉದ್ದೇಶ ವಕ್ಸ್ ಕಾಯ್ದೆಯ ಅನುಷ್ಠಾನವನ್ನು ಬಿಜೆಪಿ ತನ್ನ ಬಹುಮತದ ಬಲದಿಂದ ದುರುಪಯೋಗಪಡಿಸಿಕೊಂಡು ದೇಶವನ್ನು ಕೇಸರಿ ಬಣ್ಣದಿಂದ ಮುಚ್ಚಲು ಪುಯತ್ನಿಸುತ್ತಿದೆ ಎಂದು ಆರೋಪಿಸಿದರು.
ಈ ಮಸೂದೆ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿ, ಹಾಗೆಯೇ ವಕ್ಸ್ ಸಂಸ್ಥೆಗಳ ಶಕ್ತಿಯನ್ನು ಕುಂದಿಸುತ್ತಿವೆ. ಈಗಿನ ಕಾನೂನುಗಳು ಹಿಂದೂ ಧಾರ್ಮಿಕ ಆಸ್ತಿಗಳನ್ನು ಹಿಂದೂ ಅಲ್ಲದವರಿಂದ ನಿರ್ವಹಿಸುವಂತಾಗಲು ನಿರ್ಬಂಧಿಸುತ್ತವೆ. ಆದರೆ ಹೊಸ ವಕ್ಸ್ ಮಸೂದೆಯಡಿಯಲ್ಲಿ, ವಕ್ಸ್ ಬೋರ್ಡ್ ಸದಸ್ಯರ ಬಹುಪಾಲು-ಸಿಇಒ ಸಹ ಮುಸ್ಲಿಮ್ ಆಗಿರುವ ಅವಶ್ಯಕತೆ ಇಲ್ಲ. ಇದು ವಕ್ಸ್ ಆಡಳಿತವನ್ನು ಕಬಳಿಸಲು ಮಾಡಿದ ಸಂಚು ಎಂದರು. ಜಾರಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ವಕ್ಸ್ ಮಸೂದೆ -2024ನ್ನು ವಿರೋಧಿಸಿ ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಮಾರ್ಚ್ 1ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಛೇರಿವರಗೆ ಪ್ರತಿಭಟನೆ ಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಮೀರ್ ಖಾನ್, ಸೈಯದ್ ಅನ್ಸರ್, ಫೈರೋಜ್ ಪಾಶ, ಸಮೀರ್ ಖಾನ್, ಸಮೀರ್ ಅಹಮದ್, ನವೀದ್ ಇತರರು ಉಪಸ್ಥಿತರಿದ್ದರು.