
ಹಾಸನ: ಬಜೆಟ್ ಅಧಿವೇಶನ ಸಂದರ್ಭದಲ್ಲಿ ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಸದನದಲ್ಲಿ ನೌಕರರ ಪರವಾಗಿ ಮಾತನಾಡುವಂತೆ ಒತ್ತಾಯಿಸಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಅರಸೀಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು.
ನಮ್ಮ ದೇಶದಲ್ಲಿ ಅಪೌಷ್ಟಿಕತೆ ವ್ಯಾಪಕವಾಗಿ ಹರಡಿದೆ. ಭಾರತದ ಅರ್ಧದ?ÀÄ್ಟ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಯು ಮಗುವನ್ನು ಸಂಪೂರ್ಣವಾಗಿ ಕ್ರಿಯಾತ್ಮಕ ವಯಸ್ಕನಾಗಿ ಅಭಿವೃದ್ಧಿಪಡಿಸುವುದನ್ನು ತಡೆಯುತ್ತದೆ ಮತ್ತು ಇದು ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ನಮ್ಮ ರಾ?À್ಟ್ರದ ಭವಿ?À್ಯದ ಮೇಲೆ ಪರಿಣಾಮ ಬೀರುವ ದೊಡ್ಡ ಸವಾಲಾಗಿದೆ, ಇದು ಭಾರತದ ಜನಸಂಖ್ಯೆಯಲ್ಲಿ 39% ಮಕ್ಕಳಲ್ಲಿ ಹೊಂದಿದೆ. ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು 15 ಆಗಸ್ಟ್ 1995 ರಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪ್ರಾರಂಭಿಸಲಾಯಿತು. ಇದರ ಉದ್ದೇಶವು ವಿದ್ಯಾರ್ಥಿಗಳ ದಾಖಲಾತಿ, ಮತ್ತು ಹಾಜರಾತಿಯನ್ನು ಉತ್ತಮಗೊಳಿಸುವ ಮೂಲಕ ಶಿಕ್ಷಣದ ಸಾರ್ವತ್ರೀಕರಣವನ್ನು ಹೆಚ್ಚಿಸುವುದು ಮತ್ತು ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸುವುದು.
ಮಧ್ಯಾಹ್ನದ ಬಿಸಿಯೂಟ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರ ವ್ಯಾಪ್ತಿಗೆ ಒಳಪಡುತ್ತದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, 11.20 ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ 11.80 ಕೋಟಿ ಮಕ್ಕಳಿಗೆ ಈ ಬಿಸಿಯೂಟ ಸೇವೆ ನೀಡಲಾಗುತ್ತಿದೆ ಎಂದರು. ಶಾಲೆಗಳಲ್ಲಿ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸಲು, ಹಸಿವೆಯನ್ನು ತಡೆಗಟ್ಟಲು, ಶಾಲಾ ಭಾಗವಹಿಸುವಿಕೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವಲ್ಲಿ ಮತ್ತು ಲಿಂಗ ಸಮಾನತೆಯನ್ನು ಹೆಚ್ಚಿಸುವಲ್ಲಿ ಒಆಒ ಯೋಜನೆಗಳು ಸಹಾಯ ಮಾಡಿದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಇತ್ತೀಚಿನ ಅಧ್ಯಯನವು ಗ್ರಾಮೀಣ ಕುಟುಂಬಗಳ ಕ್ಯಾಲೊರಿ ಸೇವನೆಯ 15% ರ?ÀÄ್ಟ ಈ ಯೋಜನೆಯಿಂದ ಬಂದಿದೆ ಎಂದು ತೋರಿಸಿದೆ. 2001 ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪ್ರಾಥಮಿಕ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಬೇಯಿಸಿದ ಊಟವನ್ನು ನೀಡುವುದನ್ನು ಸರ್ಕಾರಕ್ಕೆ ಕಡ್ಡಾಯಗೊಳಿಸಿತು ಎಂದು ಹೇಳಿದರು.
ಮೇಲಿನ ಎಲ್ಲಾ ಸಾಧನೆಗಳು ತಳಮಟ್ಟದಲ್ಲಿ ಸುಮಾರು 26 ಲಕ್ಷ ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ (ಅಡುಗೆಯ ಸಹಾಯಕರು) ಶ್ರಮದಿಂದ ಮಾತ್ರ ಸಾಧ್ಯವಾಗಿದೆ. ಅವರಲ್ಲಿ 98% ಮಹಿಳೆಯರು ಸಾಮಾಜಿಕವಾಗಿ ಹಿಂದುಳಿದ, ಅತಿಕಡುಬಡತನ ಕುಟುಂಬದ, ವಿಧವೆ, ವಿಚ್ಛೇದಿತ ಮಹಿಳೆಯರಾಗಿದ್ದಾರೆ. ಮತ್ತು ತಮ್ಮ ದಿನನಿತ್ಯದ ಬದುಕಿಗೆ ಕ?À್ಟಪಡುತ್ತಿದ್ದಾರೆ. ಬಡ, ರೈತ, ಕೃಷಿಕೂಲಿಕಾರರ, ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ, ಹಾಲು ನೀಡಿ, ಶಾಲಾ ಸ್ವಚ್ಛತೆ ಮಾಡಿ, ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತತನದ ಪರಿಶ್ರಮವಿದೆ. ದಿನಕ್ಕೆ ಸುಮಾರು 6-8 ಗಂಟೆಗಳ ಕಾಲ ಕೆಲಸ ಮಾಡುವ ಇವರನ್ನು ಕಾರ್ಮಿಕರೆಂದು ಗುರುತಿಸಲಾಗಿಲ್ಲ ಮತ್ತು ಕನಿ?À್ಠ ವೇತನವನ್ನು ಸಹ ನೀಡಲಾಗುವುದಿಲ್ಲ. ಅವರು ಯಾವುದೇ ಮೂಲಭೂತ ಸೌಲಭ್ಯವಾಗಲಿ, ಸಾಮಾಜಿಕ ಭದ್ರತೆ ಪ್ರಯೋಜನಗಳಾಗಲಿ ಪಡೆಯುತ್ತಿಲ್ಲ. ಮತ್ತು ವರ್ಷದಲ್ಲಿ ಕೇವಲ ಹತ್ತು ತಿಂಗಳು ಮಾತ್ರ ಕೆಲಸಕ್ಕೆ ಗೌರವಧನ ಪಡೆಯುತ್ತಿದ್ದಾರೆ. 2009 ರಿಂದ ಬಿಸಿ ಯೂಟ ಕಾರ್ಮಿಕರಿಗೆ ತಿಂಗಳಿಗೆ ಕೇವಲ 1000 ರೂ ವೇತನ ನೀಡುತ್ತಿರುವುದು ದೇಶದಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ.
ಈ ವೇತನ ಸಹ ಪ್ರತಿ ತಿಂಗಳು ನೀಡಲಾಗುವುದಿಲ್ಲ ಎಂದರು. ಮೇ 2013 ರಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನದ 45 ನೇ ಅಧಿವೇಶನವು, ಭಾರತ ಸರ್ಕಾರದ ಇತರ ಯೋಜನೆಗಳ ಕಾರ್ಮಿಕರೊಂದಿಗೆ ಮಧ್ಯಾಹ್ನದ ಬಿಸಿಯೂಟದ ಕೆಲಸಗಾರರನ್ನು ಕಾರ್ಮಿಕರೆಂದು ಗುರುತಿಸಲು, ಕನಿ?À್ಠ ವೇತನವನ್ನು ಪಾವತಿಸಲು ಮತ್ತು ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ನೀಡಲು ಶಿಫಾರಸು ಮಾಡಿದೆ. 2013-14ನೇ ಹಣಕಾಸು ವರ್ಷದಲ್ಲಿ ಮಧ್ಯಾಹ್ನದ ಊಟದ ಕಾರ್ಮಿಕರ ಸಂಭಾವನೆಯನ್ನು ಹೆಚ್ಚಿಸಲಾಗುವುದು ಎಂದು ಸರ್ಕಾರದ ಪ್ರತಿನಿಧಿಯು ಐಎಲ್ಸಿಯಲ್ಲಿ ಭರವಸೆ ನೀಡಿದರು. ಆಗಿನ ಸಚಿವರು ಪದೇ ಪದೇ ಭರವಸೆ ನೀಡಿದರೂ ತಿಂಗಳಿಗೆ 1000 ರೂ.ಗಳ ಹೆಚ್ಚಳ ಪ್ರಸ್ತಾವನೆ ಇನ್ನೂ ಜಾರಿಯಾಗಿರುವುದಿಲ್ಲ್ಲ. ಮಧ್ಯಾಹ್ನದ ಊಟ ಯೋಜನೆಯನ್ನು ಪುನಶ್ಚೇತನಗೊಳಿಸಲಾಗುವುದು” ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಎನ್ಡಿಎ ಸರ್ಕಾರವು ಇತರ ಸಾಮಾಜಿಕ ಭದ್ರತಾ ಯೋಜನೆಗಳೊಂದಿಗೆ ಎಂಡಿಎAಎಸ್ಗೆ ಬಜೆಟ್ನಲ್ಲಿ ಕಡಿತಗೊಳಿಸುತ್ತಿರುವುದು ಆಶ್ಚರ್ಯಕರವಾಗಿದೆ. ಈ ಯೋಜನೆಯನ್ನು ಅನೇಕ ರಾಜ್ಯಗಳಲ್ಲಿ ವೇದಾಂತದAತಹ ಕಾರ್ಪೊರೇಟ್ ಸಂಸ್ಥೆಗಳಿಗೆ ಮತ್ತು ಇಸ್ಕಾನ್ ಅಕ್ಷಯಪಾತ್ರ ಮತ್ತು ನಾಂದಿ ಫೌಂಡೇಶನ್ನAತಹ ಕಾರ್ಪೊರೇಟ್ ಎನ್ಜಿಒಗಳಿಗೆ ಹಸ್ತಾಂತರಿಸುವ ಮೂಲಕ ಖಾಸಗೀಕರಣಗೊಳಿಸಲಾಗುತ್ತಿದೆ. ದೇಶದ ಬಿಸಿಯೂಟ ಕಾರ್ಮಿಕರು ಕನಿ? ವೇತನ ಮತ್ತು ಸಾಮಾಜಿಕ ಭದ್ರತೆಗಾಗಿ ಮತ್ತು ಎಂಡಿಎAಎಸ್ ಯೋಜನೆಯನ್ನು ಬಲಪಡಿಸಲು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ ಸರಕಾರವು ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ ವೇತನ ಹೆಚ್ಚಳ ಅನು? ಜಾರಿಗೊಳಿಸಲು ಮತ್ತು ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ನೀವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕೆಂದು ನಾವು ವಿನಂತಿಸುತ್ತೇವೆ ಎಂದು ಕೋರಿದರು.
ಇದೆ ವೇಳೆ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜ್ಯೋತಿ, ಪ್ರಧಾನ ಕಾರ್ಯದರ್ಶಿ ಪಿ. ಕಲಾವತಿ ಇತರರು ಉಪಸ್ಥಿತರಿದ್ದರು.