
ಆ್ಯಂಬುಲೆನ್ಸ್ ಬಾಗಿಲು ತೆಗೆಯಲಾಗದೆ ರೋಗಿಯನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯಲು ವಿಳಂಬವಾಗಿದ್ದರಿಂದ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾದ ಗೇರ್ಬೀಸ್ ನಿವಾಸಿ ಪ್ರಭಾಕರ ಎಂಬುವವರು ಸಾಗರ ತಾಲೂಕಿನ ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲು ಸಿದ್ಧತೆಯಲ್ಲಿದ್ದಾಗ ತುರ್ತು ಸೇವೆಗೆ ಅಗತ್ಯವಿರುವ 108 ವಾಹನದ ಬಾಗಿಲು ತೆಗೆಯಲು ಬಾರದೆ ಗಂಟೆಗಟ್ಟಲೆ ಬಾಗಿಲು ತೆಗೆಯಲು ಹರಸಾಹಸಪಟ್ಟಿದ್ದಾರೆ.
ಇದನ್ನೂ ಓದಿದ್ದೀರಾ? ವಿಜಯನಗರ | ಧರ್ಮಸ್ಥಳ ಸಂಘದ ಕಿರುಕುಳ ತಾಳದೆ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಸತತ ಪ್ರಯತ್ನದಿಂದ 108 ವಾಹನದ ಬಾಗಿಲು ತೆಗೆದು ಒಮ್ಮೆಲೇ ಜೋರಾಗಿ ಬಾಗಿಲು ಹಾಕಿದ ಶಬ್ದಕ್ಕೆ ಚಿಕಿತ್ಸೆಗೆಂದು ಬಂದಿದ್ದ ಪ್ರಭಾಕರ ಎಂಬುವವರು ಮೃತಪಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.